ಪ್ರಗತಿ ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗ ಹೊಡೆದ ಕಾಂಗ್ರೆಸ್ ಶಾಸಕ ಪಾಲ್ | ಜನತಾ ನ್ಯೂಸ್
ಪಠಾಣಕೋಟ್ : ಸಮಾರಂಭದಲ್ಲಿ ಪ್ರಗತಿಯನ್ನು ಪ್ರಶ್ನಿಸಿದ್ದಕ್ಕೆ ಯುವಕನೋರ್ವನನ್ನು ಪಂಜಾಬ್ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರು ಹಿಗ್ಗಾಮುಗ್ಗ ಹೊಡೆದಿರುವ ಘಟನೆ ಪಂಜಾಬ್ ರಾಜ್ಯದ ಪಠಾಣ್ ಕೋಟ್ ನಲ್ಲಿ ನಡೆದಿದೆ.
"ನಮ್ಮ ಜಿಲ್ಲೆಯಲ್ಲಿ ನೀವು ಏನು ಕೆಲಸ ಮಾಡಿದ್ದೀರಿ" ಎಂದು ಶಾಸಕರನ್ನು ಪ್ರಶ್ನಿಸಿದ ನಂತರ ನನ್ನ ಮಗನನ್ನು ಶಾಸಕ, ಪೊಲೀಸರು ಮತ್ತು ಇತರರು ಥಳಿಸಿದರು, ಎಂದು ಸಂತ್ರಸ್ತನ ತಾಯಿ ದೂರಿದ್ದಾರೆ.
ಪಂಜಾಬನ ಪಠಾಣ್ ಕೋಟ್ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಅವರ ಕ್ಷೇತ್ರ ಭೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ನನ್ನ ಮಗನಿಗೆ ನ್ಯಾಯ ಬೇಕು. "ನಮ್ಮ ಜಿಲ್ಲೆಯಲ್ಲಿ ನೀವು ಏನು ಕೆಲಸ ಮಾಡಿದ್ದೀರಿ" ಎಂದು ಶಾಸಕರನ್ನು ಕೇಳಿದ ನಂತರ ಶಾಸಕ ಪಾಲ್, ಪೊಲೀಸರು ಮತ್ತು ಇತರರು ನನ್ನ ಮಗನನ್ನು ಥಳಿಸಿದರು ಎಂದು ಸಂತ್ರಸ್ತನ ತಾಯಿ ಎಏನ್ಐಗೆ ತಿಳಿಸಿದ್ದಾರೆ.